ಹಿರಿಯಡ್ಕ ಮೇಳದ ನೂತನ ಪ್ರಸಂಗ ಗುಳಿಗೋದ್ಭವ-ಪಂಜೂರ್ಲಿ ಪ್ರತಾಪ ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಡಿಸೆ೦ಬರ್ 11 , 2014
|
ಡಿಸೆ೦ಬರ್ 11, 2014
|
ಹಿರಿಯಡ್ಕ ಮೇಳದ ನೂತನ ಪ್ರಸಂಗ ಗುಳಿಗೋದ್ಭವ-ಪಂಜೂರ್ಲಿ ಪ್ರತಾಪ ಬಿಡುಗಡೆ
ಹಿರಿಯಡ್ಕ :
ತುಳುನಾಡಿನ ಜನರ ಮನ ಮನಗಳಲ್ಲಿ ಆರಾದಿಸಲ್ಪಡುವ ದೈವ ದೇವತೆಗಳ ಕಥೆಯನ್ನು ಯಕ್ಷಗಾನದ ಮೂಲಕ ಆಡಿತೋರಿಸಿದಾಗ ದೈವಗಳ ಕಾರಣೀಕವು ಹೆಚ್ಚು ಹೆಚ್ಚು ಜನರನ್ನು ತಲುಪುತ್ತದೆ. ಬಹು ಸಂಖ್ಯಾತ ಜನರಿಂದ ಆರಾದೀಸಲ್ಪಡುವ ಗುಳಿಗ ಮತ್ತು ಪಂಜೂರ್ಲಿ ದೈವಗಳ ಕಾರಣೀಕವು ಯಕ್ಷಗಾನವೆಂಬ ಪ್ರಭಲ ಮಾದ್ಯಮದ ಮೂಲಕ ನಾಡಿನಾದ್ಯಂತ ಪಸರಿಸಲಿ, ಯಕ್ಷಗಾನಕ್ಕೆ ಹೆಚ್ಚು ಪ್ರೇಕ್ಷಕರು ಸೆಳೆಯಲ್ಪಡುವುದರೊಂದಿಗೆ ಯಕ್ಷಗಾನದೊಂದಿಗೆ ಭೂತಾರಾದನೆಯೂ ನೆರವೇರಲಿ” ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರುತ ಮಣಿಪಾಲದ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಶನಿವಾರ ಹಿರಿಯಡ್ಕದಲ್ಲಿ ನಡೆದ ಮಂಗಳೂರಿನ ಸಯ್ಯಾದ್ರಿ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿ ವರ್ದನ್ ಮೃತ್ಯುಂಜಯ ವಿರಚಿತ ಪಾಡ್ದನಗಳ ಆಧಾರಿತ ನೂತನ ಕೃತಿ ಗುಳಿಗೋದ್ಭವ-ಪಂಜೂರ್ಲಿ ಪ್ರತಾಪ ಪ್ರಸಂಗ ಬಿಡುಗಡೆ ಸಮಾರಂಭದಲ್ಲಿ ಶುಭಾಸಂಸನೆ ಮಾಡಿದರು. ಉನ್ನತ ಶಿಕ್ಷಣದ ವಿದ್ಯಾರ್ಥಿಯಿಂದ ರಚಿಸಲ್ಪಟ್ಟ ಈ ಕೃತಿಯ ಪ್ರೇರಣೆಯಿಂದ ಹೆಚ್ಚು ಹೆಚ್ಚು ಸುಶಿಕ್ಷರು ಯಕ್ಷಗಾನ ಕ್ಷೇತ್ರದತ್ತ ಆಕರ್ಷಿಸಲಿ ಎಂದು ಅವರು ಹಾರೈಸಿದರು.
ಹಿರಿಯಡ್ಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗನಾಥ ಭಟ್ ಅದ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಮಾಡಿದರು. ಹಿರಿಯಡ್ಕದ ಹಿರಿಯ ಉದ್ಯಮಿ ಕೆ. ರಾಜಾರಾಮ ಹೆಗ್ಡೆ ನೂತನ ಕೃತಿಯನ್ನು ಮೇಳದ ಬಾಗವತ ವಿಷ್ಣು ಸುಬ್ರಾಯ ಹೆಗಡೆಯವರಿಗೆ ಹಸ್ತಾಂತರಿಸಿದರು. ಉದ್ಯಮಿ ವಿಠಲ ಶ್ರೀಯಾನ್ ಮುಖ್ಯ ಅತಿಥಿಗಳಾಗಿದ್ದರು. ಪ್ರಸಂಗಕರ್ತ ವರ್ದನ್ ಮ್ರತ್ಯುಂಜಯ ಉಪಸ್ಥಿತರಿದ್ದರು. ಹಿರಿಯಡ್ಕ ಶ್ರೀನಿವಾಸ ರಾವ್ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು. ಸಕಲ ವಿಜ್ರಂಭಣೆಯಿಂದ ನೂತನ ಕೃತಿಯ ಪ್ರದರ್ಶನ ನೆರವೇರಿತು.
|
|
|